Thursday, January 3, 2013

ಸಕಾರಾತ್ಮಕ ಧೋರಣೆ ಯಶಸ್ವಿ ವ್ಯಕ್ತಿಗಳು

ನಾವು ನಮ್ಮ ಜೀವನದಲ್ಲಿ ಅನೇಕ ಗುರಿಗಳನ್ನು ಸಾಧಿಸುವುದಕ್ಕೆ ಬಹಳ ಹಂಬಲಿಸುತ್ತೇವೆ. ಆದರೆ ಎಲ್ಲರೂ ತಮ್ಮ ಗುರಿಗಳನ್ನು ತಲುಪುವುದರಲ್ಲಿ ಯಶಸ್ವಿಯಾಗುವುದಿಲ್ಲ. ಸಾಧಿಸಿ ಯಶಸ್ವೀ ವ್ಯಕ್ತಿಗಳೆಂದು ಪ್ರಸಿದ್ಧರಾದ ಜನರ ಬದುಕನ್ನು ಗಮನಿಸಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ. ಅದು ಏನೆಂದರೆ ಯಶಸ್ವಿ ವ್ಯಕ್ತಿಗಳು ತಮ್ಮ ಸಾಮರ್ಥ್ಯವನ್ನು ಹಾಗೂ ಗುರಿ ಮುಟ್ಟುವುದರ ಬಗ್ಗೆ ತಳೆದಿದ್ದ ಸಕಾರಾತ್ಮಕ ಧೋರಣೆ. ಅನೇಕ ರೀತಿ ಗುರಿ ಮುಟ್ಟುವುದರಲ್ಲಿ ನಿಷ್ಪಲರಾದವರಲ್ಲಿ ಕಂಡುಬರುವ ಸಕಾರಾತ್ಮಕ ಧೋರಣೆ. ಈ ವಾದಕ್ಕೆ ಬೆಂಬಲ ನೀಡುವ ಕೆಳಕಂಡ ಸಂಗತಿಯನ್ನು ಗಮನಿಸಿ.
ಬಹಳ ಪ್ರಸಿದ್ಧವಾದ ಪಾದರಕ್ಷೆ ತಯಾರಿಕಾ ಸಂಸ್ಥೆ ಅವರ ವ್ಯಾಪಾರೀ ವಿಭಾಗದ ಅಧಿಕಾರಿಯನ್ನು ಆಫ್ರಿಕಾ ಖಂಡದ ಒಂದು ದೇಶಕ್ಕೆ ಕಳುಹಿಸಿದರಂತೆ. ಆ ಅಧಿಕಾರಿಯು ತನ್ನ ವರದಿಯಲ್ಲಿ ಸಂಸ್ಥೆಯು ಆ ದೇಶದಲ್ಲಿ ವ್ಯಾಪಾರ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಅಲ್ಲಿನ ಜನರು ಪಾದರಕ್ಷೆಯನ್ನು ಧರಿಸುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರಂತೆ. ಆದರೆ ಇನ್ನೊಂದು ಸಂಸ್ಥೆಯ ಅಧಿಕಾರಿ ಅದೇ ದೇಶಕ್ಕೆ ಭೇಟಿ ನೀಡಿ ಅಲ್ಲಿ ಪಾದರಕ್ಷೆಗಳಿಗೆ ಅತ್ಯಂತ ಬೇಡಿಕೆ ಬರುವಂತೆ ಮಾಡಬಹುದು, ಏಕೆಂದರೆ ಅಲ್ಲಿ ಯಾರೂ ಪಾದರಕ್ಷೆಗಳನ್ನು ಧರಿಸಿಯೇ ಇಲ್ಲ ಎಂದಂರಂತೆ. ಇದರಲ್ಲಿ ಯಶಸ್ವಿಯಾದರು ಯಾರು ಎಂಬುದನ್ನು ಹೇಳಬೇಕಾಗಿಲ್ಲ. ಅದಕ್ಕೆ ಅವರ ಸಕಾರಾತ್ಮಕ ಧೋರಣೆಯೇ ಕಾರಣ ಎಂಬುದು ಸ್ಪಷ್ಟವಾಗುತ್ತದೆ.
ನಾವು ಈ ರೀತಿಯ ಸಕಾರಾತ್ಮಕ ಧೋರಣೆ ಬೆಳೆಸಿಕೊಳ್ಳಬೇಕಾಗಿದೆ. ನಮ್ಮ ಬದುಕನ್ನು ನಮ್ಮದೇ ಆದ ದೃಷ್ಟಿಕೋನದಲ್ಲಿ ವೀಕ್ಷಿಸುತ್ತೇನೆ. ಈ ದೃಷ್ಟಿಕೋನವನ್ನು ನಮ್ಮ ಅನುಭವಗಳು, ಶಿಕ್ಷಣ, ಮನೆಯ ವಾತಾವರಣ, ಬೆಳೆಯುವಾಗ ಶಾಲೆಯ ಕಾಲೇಜಿನ ಹಾಗೂ ಸ್ನೇಹಿತರ ಪ್ರಭಾವ ಇತ್ಯಾದಿಗಳು ರೂಪಿಸುತ್ತವೆ. ಆದರೆ ನಮ್ಮ ಅನುಭವಗಳು ಸರ್ವಕಾಲಿಕ ಸತ್ಯವಾಗಿರುವುದಿಲ್ಲ. ಒಮ್ಮೆ ಸರಿಯೆನಿಸಿದ್ದು ಇನ್ನೊಮ್ಮೆ ಸರಿಯಿಲ್ಲವೆನಿಸುವುದು. ಗಮನಿಸಬೇಕಾದ ಇನ್ನೂ ಒಂದು ಅಂಶವೆಂದರೆ ಯಾವುದೇ ಒಂದು ಸಮಸ್ಯೆಗೂ ಅನೇಕ ಮುಖಗಳಿರುತ್ತದೆ. ನಾವು ಯಾವುದೇ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬೇಕಾದರೆ ಎಲ್ಲಾ ದೃಷ್ಟಿಕೋನಗಳಿಂದ ನೋಡುವುದು ಅವಶ್ಯಕ. ಇಲ್ಲದಿದ್ದರೆ ಪರಿಹಾರ ಸಂಪೂರ್ಣವಾಗಿರುವುದಿಲ್ಲ.
ಸಕಾರಾತ್ಮಕ ಧೋರಣೆ ಬೆಳೆಸಿ, ಉಳಿಸಿಕೊಳ್ಳಬೇಕಾದರೆ ನಮ್ಮ ನಿರೀಕ್ಷೆಗಳು ವಾಸ್ತವಿಕವಾಗಿರುವುದು ಅವಶ್ಯಕ. ನಮ್ಮ ಅನೇಕ ಹಂಬಲ, ಆಸೆ, ಆಕಾಂಕ್ಷೆಗಳು ವಿಪರೀತವಾಗಿದ್ದರೆ ನಮ್ಮ ಮಾನಸಿಕ ಒತ್ತಡ ಏರುತ್ತದೆ. ಈ ರೀತಿಯ ಸಂದರ್ಭಗಳು ಮೊದಲೇ ನಾವು ತಿಳಿದುಕೊಂಡಿದ್ದರೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಎದುರಿಸಿ ಗೆಲ್ಲಬಹುದು. ನಮ್ಮ ನಿರೀಕ್ಷೆಗಳನ್ನು ಇನ್ನು ಕೆಲವು ವೇಳೆ ವಾಸ್ತವಿಕವಾಗಿ ಯೋಚಿಸಿ ಬದಲಿಸಬಹುದು ಅಥವಾ ಕೈ ಬಿಡಬಹುದು. ನಾವು ಈ ರೀತಿಯ ಸಕಾರಾತ್ಮಕ ದೃಷ್ಟಿ ಬೆಳೆಸಿಕೊಳ್ಳಬೇಕಾದರೆ ನಮ್ಮ ಸ್ವ ಸಾಮರ್ಥ್ಯ ಹಣಕಾಸಿನ ವ್ಯವಸ್ಥೆ, ಜನರ ಬೆಂಬಲಗಳನ್ನು ಪರಿಗಣಿಸಿ ಜೀವನದ ನಿರೀಕ್ಷೆಗಳನ್ನು ರೂಪಿಸಿಕೊಳ್ಳಬೇಕು. ನಮ್ಮ ಜೀವನದ ಗುರಿ ಅಥವಾ ಆಕಾಂಕ್ಷೆಗಳನ್ನು ರೂಪಿಸಿಕೊಳ್ಳಲು ಕೆಳಕಂಡ ಅಂಶಗಳನ್ನು ಗಮನಿಸುವುದು ಅವಶ್ಯಕ.



. ಸ್ಟ್ರೆಂತ್  = ಅರ್ಹತೆಗಳು
ಗುರಿಯನ್ನು ಮುಟ್ಟಲು ನಮ್ಮಲ್ಲಿ ಇರುವ ಮೂಲಭೂತ ಅರ್ಹತೆಗಳು ಮಾನಸಿಕ ಶಕ್ತಿ ದೈಹಿಕ ಕ್ಷಮತೆ, ವಿದ್ಯಾರ್ಹತೆ ಹಾಗೂ ಇವುಗಳನ್ನು ವೃದ್ಧಿಸಿಕೊಳ್ಳುವ ಅವಕಾಶಗಳನ್ನು ಗಮನಿಸಬೇಕು.
. ವೀಕ್ನೆಸ್ = ನ್ಯೂನತೆಗಳು
ನಮ್ಮಲ್ಲಿ ಇರುವ ಲೋಪ ದೋಷಗಳು ಅರ್ಹತೆಗಳನ್ನು ಪಟ್ಟಿಮಾಡಿ ಅವುಗಳನ್ನು ಸರಿಪಡಿಸಿಕೊಳ್ಳಬೇಕು ಅಥವಾ ಕಡಿಮೆ ಮಾಡಿಕೊಳ್ಳಬೇಕು. ಅರ್ಹತೆಗಳು ಹೆಚ್ಚಾದಷ್ಟೂ ಹಾಗೂ ನ್ಯೂನತೆಗಳು ಕಡಿಮೆಯಾದಷ್ಟೂ ನಾವು ಗೆಲ್ಲುವ ಸಾಧ್ಯತೆ ಹೆಚ್ಚು.
. ಆಪರ್ಚ್ಯುನಿಟೀಸ್ = ಅವಕಾಶಗಳು
ನಮ್ಮ ಗುರಿ ಮುಟ್ಟಲು ಇರುವ ಅನೇಕ ಅವಕಾಶಗಳು ಅದು ಸಿಗುವ ಸ್ಥಳ, ಬೆಳೆಯುವ ಸಾಧ್ಯತೆ ಇತ್ಯಾದಿಗಳನ್ನು ವಿದವಾಗಿ ಅಭ್ಯಸಿಸಬೇಕು.
. ಥ್ರೆಟ್ಸ್ = ಬೆದರಿಕೆಗಳು
ನಮ್ಮ ಗುರಿ ಸಾಧನೆಯ ಮಾರ್ಗದಲ್ಲಿ ಬರಬಹುದಾದ ಅಡಚಣೆ ಕಷ್ಟಗಳು ಗೊತ್ತಿರುವ ಅಥವಾ ಗೊತ್ತಾಗದ ಸಮಸ್ಯೆಗಳು ಹಾಗೂ ಅವುಗಳನ್ನು ಪರಿಹರಿಸುವ ಉಪಾಯಗಳು ಯಾವುವು ಎಂಬುದನ್ನು ತಿಳಿದುಕೊಂಡರೆ ನಾವು ನಮ್ಮ ಗುರಿ ಸಾಧನೆಗೆ ಸಹಕಾರಿಯಾಗುತ್ತದೆ.
ಈ ರೀತಿ ನಮ್ಮ ಗುರಿ ಅಭಿಲಾಷೆಗಳನ್ನು ವೈಜ್ಞಾನಿಕವಾಗಿ ವಿಮರ್ಶಿಸುವ ಪದ್ಧತಿಯನ್ನು ಎಸ್‌ ಡಬ್ಲ್ಯೂ ಟಿ ಅನಾಲಿಸಿಸ್ ಎಂದು ಕರೆಯುತ್ತಾರೆ. ಇದರಿಂದ ನಮಗೆ ನಮ್ಮ ಗುರಿಗಳನ್ನು ತಲುಪುವುದರಲ್ಲಿ ಅತ್ಯಂತ ಪ್ರಮುಖವಾದ ಸಕಾರಾತ್ಮಕ ಧೋರಣೆ ಬೆಳೆಸಿಕೊಳ್ಳುವುದರಲ್ಲಿ ಸಹಕಾರಿಯಾಗುತ್ತದೆ.

ನಾನು ಯಾರು?


ಕೆಟ್ಟ ಚಟ ಬಹು ಬೇಗನೆ ಕಲಿತು ಬಿಡುತ್ತೇವೆ . ಆದರೆ ಅದನ್ನು ಬಿಡುವುದು ಕಲಿತಷ್ಟು ಸುಲಭವಲ್ಲ. ಕೆಲವರು ತುಂಬಾ ಮಾನಸಿಕ ಸಿದ್ಧತೆ ಮಾಡಿ ಅದನ್ನು ಬಿಟ್ಟರೂ ಕೆಟ್ಟ ಚಟಗಳಗಳ ನೆನಪು ಪದೇಪದೆ ಬರ್ತಾ ಇರುತ್ತದೆ. ಅಲ್ಲದೆ ತಲೆನೋವು, ಖಿನ್ನತೆ ಉಂಟಾಗುವುದು. ಈ ಎಲ್ಲಾ ಸಮಸ್ಯೆಗಳನ್ನು ಆಹಾರದ ಮುಖಾಂತರ ಪರಿಹರಿಸಬಹುದು.

1. ಸಕ್ಕರೆ: ಮದ್ಯ ಕುಡಿಯುವುದನ್ನು ನಿಲ್ಲಿಸಿದ ನಂತರ ಸಕ್ಕರೆ ಅಥವಾ ಸಿಹಿ ತಿನ್ನ ಬೇಕೆನಿಸುತ್ತಿರುತ್ತದೆ. ಈ ರೀತಿ ಅನಿಸಿದಾಗ ಖರ್ಜೂರ, ಬಾಳೆಹಣ್ಣು ತಿನ್ನಬೇಕು.ಮದ್ಯಬಿಟ್ಟ ತಕ್ಷಣ ಅನ್ನ, ಆಲೂಗೆಡ್ಡೆ, ಒಣದ್ರಾಕ್ಷಿ ಅಂತಹ ಪದಾರ್ಥಗಳನ್ನು ಸ್ವಲ್ಪ ಸಮಯತಿನ್ನಬಾರದು.

2. ವಿಟಮಿನ್ ಮತ್ತು ಖನಿಜಾಂಶಗಳು: ಮದ್ಯ ಬಿಟ್ಟ ತಕ್ಷಣ ವಿಟಮಿನ್ ಮತ್ತು ಖನಿಜಾಂಶಗಳನ್ನು ಅಧಿಕ ತಿನ್ನಬೇಕು. ಈ ಸಮಯದಲ್ಲಿ ಮೊಟ್ಟೆ, ತರಕಾರಿ, ಮಾಂಸ, ಟೊಮೆಟೊ, ಈರುಳ್ಳಿ, ದವಸಧಾನ್ಯಗಳು ಮತ್ತು ಮೃದ್ವಂಗಿಗಳನ್ನು ಆಹಾರಕ್ರಮದಲ್ಲಿ ಸೇರಿಸಬೇಕು.

3. ಮದ್ಯದ ಬೇಡಿಕೆಗೆ ಕಡಿವಾಣ: ಮದ್ಯ ಕುಡಿಯಬೇಕೆಂದು ಅನಿಸಿದಾಗ ಸಿಹಿಗೆಣಸು ಬೇಯಿಸಿದ್ದು, ಸೇಬು, ಚೆರಿ ಹಣ್ಣುಗಳನ್ನು ತಿನ್ನಿ. ಸಮುದ್ರ ಆಹಾರ ಸೇವನೆ ಒಳ್ಳೆಯದು. ದಿನವೂ 8 ಲೋಟಕ್ಕಿಂತ ಅಧಿಕ ನೀರನ್ನು ಕುಡಿಯಬೇಕು.

4. ಮದ್ಯ ಮನೆಯಲ್ಲಿ ಇಡಬೇಡಿ: ಯಾವುದೇ ಕಾರಣಕ್ಕೂ ಮದ್ಯವನ್ನು ಮನೆಯಲ್ಲಿ ಇಡಬಾರದು. ಮದ್ಯದ ಬಾಟಲಿಯತ್ತ ನೋಡಿದಾಗ ಕುಡಿಯಬೇಕೆನಿಸುವುದು. ಹೊತ್ತಿಗೆ ಸರಿಯಾಗಿ ಊಟ ಮಾಡಬೇಕು.

ಖಿನ್ನತೆಯನ್ನು ಗುಣ ಪಡಿಸದಿದ್ದರೆ ಜೀವಕ್ಕೆ ಅಪಾಯ

ನಗರ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಮಾನಸಿಕ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಕೆಲಸದ ಒತ್ತಡ, ಒಂಟಿತನ, ಮೋಸ, ಆರ್ಥಿಕ ಸಮಸ್ಯೆ ಇವೆಲ್ಲಾ ಮಾನಸಿಕ ಸಮಸ್ಯೆ ಉಂಟಾಗಲು ಪ್ರಮುಖ ಕಾರಣಗಳಾಗಿವೆ.ಈ ರೀತಿ ಉಂಟಾದರೆ ಖಿನ್ನತೆ, ಸುಸ್ತು, ನಿರಾಸೆ, ನಿರಾಸಕ್ತಿ ಉಂಟಾಗುತ್ತದೆ. ಈ ರೀತಿ ಒಂದು ಅಥವಾ ಎರಡು ದಿನವಿದ್ದರೆ ಸರಿ, ಆದರೆ ಇದೇ ಖಿನ್ನತೆ ತುಂಬಾ ದಿನಗಳವರೆಗೆ ಇದ್ದರೆ ಆ ವ್ಯಕ್ತಿ ಮಾನಸಿಕ ಸ್ಥಿಮಿತ ಕಳೆದುಕೊಳ್ಳಬಹುದು. ಆದ್ದರಿಂದ ನಮ್ಮ ಮನೆಯಲ್ಲಿ ಯಾರಾದರೂ ಅಥವಾ ನಮ್ಮ ಗೆಳೆಯರು ಖಿನ್ನತೆಯಲ್ಲಿದ್ದರೆ ಮೊದಲನೇ ಹಂತದಲ್ಲಿಯೇ ಅವರನ್ನು ಅದರಿಂದ ಹೊರತರಲು ಶ್ರಮಿಸಬೇಕು. ಇಲ್ಲದಿದ್ದರೆ ಅವರ ಸ್ಥಿತಿ ಮತ್ತಷ್ಟು ಗಂಭೀರವಾಗಬಹುದು ಅಥವಾ ಏನಾದರೂ ಅನಾಹುತ ಮಾಡಿಕೊಳ್ಳಬಹುದು.ಕಾರಣ ತಿಳಿದುಕೊಳ್ಳಲು ಪ್ರಯತ್ನಿಸಿ: ಅವರು ಈ ರೀತಿ ಖಿನ್ನತೆಯಿಂದ ಇರಲು ಕಾರಣವೇನು ಎಂದು ತಿಳಿದುಕೊಳ್ಳಲು ಪ್ರಯತ್ನಿಸಿ. ಅವರು ಹೇಳದಿದ್ದರೂ ಹೇಗಾದರೂ ಕಾರಣವನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಕಾರಣ ತಿಳಿದರೆ ಅದಕ್ಕೆ ಪರಿಹಾರ ಹುಡುಕುವುದು ಸುಲಭವಾಗುತ್ತದೆ.ನೈಜತೆಯನ್ನು ಒಪ್ಪಿಕೊಳ್ಳಲು ಹೇಳಿ: ಕೆಲವೊಂದು ಆಘಾತಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದಾಗ ಖಿನ್ನತೆ ಉಂಟಾಗಬಹುದು. ಆಗ ಅವರಿಗೆ ಇದೇ ವಾಸ್ತವೆಂದು ಮನವೊಲಿಸಿ.

ಕೌನ್ಸಿಲಿಂಗ್ ಕೊಡಿಸಿ: ನಿಮಗೆ ಅವರ ಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗದಿದ್ದರೆ ಕೌನ್ಸಿಲಿಂಗ್ ಕೊಡಿಸಿ. ಬರೀ ಮಾತ್ರೆ ನುಂಗುವುದರಿಂದ ಪ್ರಯೋಜನವಿಲ್ಲ, ಈ ಸಮಯದಲ್ಲಿ ಅವರಿಗೆ ಭಾವನಾತ್ಕವಾದ ಬೆಂಬಲ (ಸಪೋರ್ಟ್) ನೀಡಬೇಕು.ಸ್ಥಳ ಬದಲಾವಣೆ: ಆ ಸ್ಥಳದಿಂದ ಅವರನ್ನು ಪ್ರಕೃತಿ ರಮಣೀಯ ಸ್ಥಳಗಳಿಗೆ ಕೊಂಡೊಯ್ಯಿರಿ. ಇದರಿಂದ ಅವರಿಗೊಂದು ಚೇಂಜ್ ದೊರೆಯುತ್ತದೆ, ಅವರ ಮಾನಸಿಕ ಸ್ಥಿತಿಯೂ ಸುಧಾರಿಸುತ್ತದೆ.
ಒತ್ತಡವಿದ್ದರೆ ಅದರಿಂದ ಅನಾಹುತವಲ್ಲದ ಬೇರೆ ಯಾವುದೇ ಪ್ರಯೋಜನವಿರುವುದಿಲ್ಲ. ಉತ್ತಮ ಕೆಲಸದಲ್ಲಿ ಇದ್ದಷ್ಟೂ ಟಾರ್ಗೆಟ್ ಜಾಸ್ತಿ ಇರುತ್ತದೆ. ಅದನ್ನು ತಲುಪಲು ಸಾಕಷ್ಟು ಒತ್ತಡ, ಮನೆ ಸಮಸ್ಯೆ ಈ ಎಲ್ಲಾ ಕಾರಣಗಳಿಂದ ನೆಮ್ಮದಿ ಹಾಳಾಗಿ ಜೀವನವೇ ಸಾಕಾಗುತ್ತದೆ. ಆದರೆ ಈ ಒತ್ತಡವನ್ನು ಕಡಿಮೆ ಮಾಡಿದಿದ್ದರೆ ಏನೇನು ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ಒತ್ತಡವಿದ್ದಾಗ ಈ ಕೆಳಗಿನ ಅಂಶಗಳನ್ನು ಪಾಲಿಸಿದರೆ ಒತ್ತಡ ಕಡಿಮೆಯಾಗುವುದು ಮತ್ತು ನಿಮ್ಮ ಗುರಿಯನ್ನು ತಲುಪುವ ಹಾದಿ ಸ್ಪಷ್ಟವಾಗುತ್ತದೆ.

1. ಒತ್ತಡಕ್ಕೆ ಕಾರಣವೇನು ಎಂದು ಕಂಡು ಹಿಡಿಯಬೇಕು: ಕಾಯಿಲೆ ಗೊತ್ತಾದರೆ ಮಾತ್ರ ಔಷಧಿ ಮಾಡಲು ಸುಲಭ. ಅದೇ ರೀತಿ ತುಂಬಾ ಮಾನಸಿಕ ಒತ್ತಡವಿದ್ದರೆ ಅದಕ್ಕೆ ಕಾರಣವೇನು ಎಂದು ಕಂಡುಹಿಡಿಯಬೇಕು. ಮನೆಯೇ, ಕೆಲಸವೇ, ಟಾರ್ಗೆಟ್ ಇನ್ಯಾವೊದೋ ಸಮಸ್ಯೆ ಇರಬಹುದು. ಮೊದಲು ಆ ಸಮಸ್ಯೆಯ ಬಗ್ಗೆ ಯೋಚಿಸಿ.

2. ಒತ್ತಡಕ್ಕೆ ಹೊಂದಿಕೊಂಡು ಹೋಗಲು ಸಾಧ್ಯವೇ ಎಂದು ಯೋಚಿಸಿ: ಬದುಕು ಎಂದ ಮೇಲೆ ಒಂದಲ್ಲಾ ಒಂದು ಒತ್ತಡವಿದ್ದೇ ಇರುತ್ತದೆ. ಈ ಒತ್ತಡವನ್ನು ಸಹಿಸಲು ಸಾಧ್ಯನಾ ಎಂದು ಯೋಚಿಸಿ. ಪ್ರತಿಯೊಬ್ಬರಿಗೆ ಅವರವರ ಸಮಸ್ಯೆ ತುಂಬಾ ದೊಡ್ಡದಾಗಿ ಕಾಣುತ್ತದೆ. ಆದ್ದರಿಂದ ಇಷ್ಟು ಒತ್ತಡವನ್ನು ಸಹಿಸುವ ಅವಶ್ಯಕತೆ ಇದೆಯೇ ಎಂದು ಯೋಚಿಸಿ.

3. ಆ ಪರಿಸ್ಥಿತಿಯಿಂದ ಬದಲಾಗಲು ಪ್ರಯತ್ನಿಸಿ: ಒತ್ತಡಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಂದರೆ ಆ ಪರಿಸ್ಥಿತಿಯಿಂದ ಹೊರಬರಲು ಪ್ರಯತ್ನಿಸಿ. ಕೆಲಸದಲ್ಲಿ ಟಾರ್ಗೆಟ್ ಮುಟ್ಟಲಿಲ್ಲ ಅಂದರೆ ಅಸಮರ್ಥರು ಅನ್ನಿಸಿಕೊಳ್ಳಬೇಕಾಗುತ್ತದೆ, ಇದನ್ನು ನೆನೆಸಿಕೊಂಡರೆ ಮತ್ತಷ್ಟು ಒತ್ತಡ ಉಂಟಾಗುತ್ತದೆ. ಆದರೆ ಸಹಿಸಲು ಅಸಾಧ್ಯವಾದ ಒತ್ತಡವನ್ನು ಹೊರಲು ಸಿದ್ಧರಾಗಬೇಡಿ, ಯಾವುದೇ ಗುರಿ ಮುಟ್ಟಲು ಸ್ಪಷ್ಟ ನಿರ್ಧಾರದಿಂದ ಮಾತ್ರ ಸಾಧ್ಯ ಹೊರತು ಒತ್ತಡದಿಂದಲ್ಲ.

4. ವಾಸ್ತವತೆಯನ್ನು ಒಪ್ಪಿಕೊಳ್ಳುವುದು: ಕೆಲವೊಂದು ವಿಷಯಗಳನ್ನು ಬದಲಾಯಿಸಲು ಸಾಧ್ಯವಿಲ್ಲ, ಅಂತಹ ಸಂದರ್ಭದಲ್ಲಿ ವಾಸ್ತವತೆಯನ್ನು ಒಪ್ಪಿಕೊಳ್ಳುವುದರಿಂದ ಅರ್ಧದಷ್ಟು ಒತ್ತಡ ಕಡಿಮೆಯಾಗುತ್ತದೆ. ನಮ್ಮಿಂದ ಆಗದ ವಿಷಯದ ಬಗ್ಗೆ ಚಿಂತಿಸಿ ಕೊರಗಿ ಅನಾರೋಗ್ಯ ಹೆಚ್ಚು ಮಾಡಿಕೊಳ್ಳುವುದಕ್ಕಿಂತ ವಾಸ್ತವತೆಯನ್ನು ಒಪ್ಪಿಕೊಳ್ಳಿ. ಈ ರೀತಿ ಮಾಡಿದರೆ ಒತ್ತಡ ಕಡಿಮೆಯಾಗುತ್ತದೆ.

5. ಮನರಂಜನೆ ವಿಷಯದ ಕಡೆಗೆ ಗಮನ ಹರಿಸಬೇಕು: ತುಂಬಾ ಜನರು ಒತ್ತಡ ಹೆಚ್ಚಾದಂತೆ ಒತ್ತಡ ಕಡಿಮೆ ಮಾಡಿಕೊಳ್ಳಲು ಧೂಮಪಾನ, ಮದ್ಯಪಾನದಂತಹ ಕೆಟ್ಟ ಚಟಗಳನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಈ ರೀತಿಯ ಅಭ್ಯಾಸದಿಂದ ಮೈಮರೆತು ಒತ್ತಡವನ್ನು ಕ್ಷಣ ಕಾಲ ಮರೆಯಬಹುದು ಅಲ್ಲದೆ ಈ ಅಭ್ಯಾಸಗಳಿಂದ ಜೀವನ ಮತ್ತಷ್ಟು ನರಕವಾಗುವುದು. ಅದರ ಬದಲು ತುಂಬಾ ಒತ್ತಡವಿದ್ದಾಗ ಪ್ರಾಣಾಯಾಮ ಮಾಡುವುದು ಒಳ್ಳೆಯ ಸಂಗೀತವನ್ನು ಕೇಳುವುದು, ಮನಸ್ಸಿಗೆ ಖುಷಿ ಕೊಡುವ ಆಟ ಆಡುವುದು ಇವುಗಳಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಹುದು



ನಾನು ಯಾರು? ಎಂಬ ಪ್ರಶ್ನೆ ತುಂಬಾ ಸರಳ ಅನಿಸಬಹುದು. ಆದರೆ ನಾವು ಹುಟ್ಟಿ ಕೆಲವು ದಿನಗಳ ನಂತರ ನಮಗೆ ಒಂದು ಹೆಸರು ದೊರೆಯುತ್ತದೆ. ಅಲ್ಲಿಯವರೆಗೆ ನಮ್ಮನ್ನು ಹೆಣ್ಣು/ಗಂಡು ಎಂದು ಗುರುತಿಸಿರುತ್ತಾರೆ.ನಾವು ಸತ್ತ ನಂತರ ನಮ್ಮ ದೇಹದ ಎದುರಿಗೇ ನಿಂತು ಜನರು ನಮ್ಮನ್ನು ಕುರಿತು "ಇವರು ಇನ್ನಿಲ್ಲ" ಎಂದು ಹೇಳುತ್ತಾರೆ. ನಮ್ಮ ದೇಹ ಅಲ್ಲೇ ಇದ್ದರು ಜನ ನಮ್ಮನ್ನು ನೋಡಿ "ಇವರು ಇನ್ನಿಲ್ಲ" ಎಂದು ಏಕೆ ಹೇಳಿದರು? ದೈಹಿಕವಾಗಿ ಸಾಯುವ ಮೊದಲು ಇತರ ವ್ಯಕ್ತಿಗಳಂತೆಯೇ ಇರುತ್ತೇವೆ, ಆದರೂ ಸತ್ತ ಕೂಡಲೇ ಅವರ ಪಾಲಿಗೆ ಇಲ್ಲವಾಗಿ ಬಿಡುತ್ತೇವೆ? ಆದ್ದರಿಂದಲೇ ನಾವು ಯಾರು? ಅನ್ನುವುದು ಮೂಲಭೂತವಾದ ಆಧ್ಯಾತ್ಮಿಕವಾದ ಪ್ರಶ್ನೆಯಾಗಿದೆ.ನಾನು ಯಾರು? ದೇಹವೋ ಅಥವಾ ಆತ್ಮವೋ ನಮ್ಮ ದೇಹದಲ್ಲಿ ಆತ್ಮ ಅನ್ನುವುದು ಇರುವವರೆಗೆ ಯೋಚನಾ ಶಕ್ತಿ ಇರುತ್ತದೆ. ದೇಹದ ಅಂಗಾಂಗಗಳು ಕೆಲಸ ಮಾಡುತ್ತವೆ, ಭಾವನೆಗಳಿರುತ್ತೆ ನಾವು ಅಳುತ್ತೇವೆ, ನಗಾಡುತ್ತೇವೆ, ಕೋಪಗೊಳ್ಳುತ್ತೇವೆ. ನಮ್ಮ ಯೋಚನೆಗಳು ಮತ್ತು ಭಾವನೆ ಕ್ಷಣದಿಂದ-ಕ್ಷಣಕ್ಕೆ ಬದಲಾಗುತ್ತಿರುತ್ತವೆ. ಹಾಗಾದರೆ ನಾನು ಯಾರು? ಆತ್ಮವೋ, ದೇಹವೋ ನಮ್ಮ ದೇಹದಲ್ಲಿ ಎಷ್ಟು ಜೀವಕಣಗಳಿವೆ, ಎಷ್ಟು ರಕ್ತ ಕಣಗಳಿವೆ ಎಂದು ಹೇಲು ಸಾಧ್ಯ. ಆತ್ಮ ಮಾತ್ರ ಕಣ್ಣಿಗೆ ಅಗೋಚರವಾದದು. ಇದು ಆಂತರಿಕವಾದ ರಹಸ್ಯವಾಗಿದೆ. ಯಾರಿಂದಲೂ ಇದನ್ನು ಬೇಧಿಸಲು ಸಾಧ್ಯವಾಗಲಿಲ್ಲ. ಆದ್ದರಿಂದಲೇ ಉಪನಿಷತ್ತುಗಳಲ್ಲಿ (ರಿಗ್ ವೇದಿಕ್ ಉಪನಿಷತ್ತು (1.3.11) ನಾನು ಯಾರು ಎಂಬ ಮೂಲಭೂತ ಪ್ರಶ್ನೆ ಕೇಳಲಾಗಿದೆ.